ಮನಸ್ಸು

image

ಮನಸ್ಸು ಯಾವಾಗಲೂ
ಸತ್ತ ನೆನಪುಗಳ ಸುತ್ತ
ಗಿರಕಿ ಹೊಡೆಯುತ್ತಲೇ
ಇರುತ್ತದೆ,
ವಿವೇಕ ಹೇಳುತ್ತದೆ
ಇದರಿಂದ ಏನೂ
ಪ್ರಯೋಜನ ಇಲ್ಲ
ಬಿಟ್ಟು ಬಿಡು ಅಂತ.
ಆದರೂ ಕೇಳಬೇಕಲ್ಲ
ಬೇಕಾದ್ದು,ಬೇಡಾದ್ದು
ಎಲ್ಲಾ ನೆನಪಿಸಿಕೊಂಡು
ಆಕಾಶವೇ ತಲೆ ಮೇಲೆ
ಬಿದ್ದವರ ತರ ಪೆಚ್ಚು
ಮೋರೆ ಹಾಕಿಕೊಂಡು
ಅತ್ತು ಅತ್ತು ಕಣ್ಣೆಲ್ಲ
ಹೆಂಡ ಕುಡಿದವರಂತೆ
ಕೆಂಗಣ್ಣು ಮಾಡಿಕೊಂಡು
ಈ ದೇಹದ ಸೌಂದರ್ಯ
ಸತ್ಯ ನಾಶ ಮಾಡೋದರಲ್ಲಿ
ಅದೇನು ಖುಷಿನೊ
ಆ ದೇವರೆ ಬಲ್ಲ!
ಓ ಮನಸೆ, ಒಮ್ಮೆ
ನೀನೆ ಯೋಚಿಸಿ ನೋಡು
ಸ್ವಗ೯ದ ಬೇರು ನಿನ್ನಲ್ಲೇ ಇದೆ
ತಂಗಾಳಿಯಾಗಿ
ಸವಿ ಸವಿಯಾದ
ನೆನಪುಗಳಷ್ಟನ್ನೇ
ನೀ ಉಳಿಸಿಕೊಂಡು
ದೇಹವನ್ನು ಆವರಿಸಿಕೊ
ಶಿರದಲ್ಲಿ ಸಿಗುವುದು
ನಿನಗೆ ರಾಜ ಮಯಾ೯ದೆ
ಮನು ಕುಲಕೆ ನೀನಾಗಿರುವೆ
ಮೂಲಾಧಾರ.
1-1-2016. 2.47pm

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮ ಟಿಪ್ಪಣಿ ಬರೆಯಿರಿ