ಮನಸ್ಸು ಯಾವಾಗಲೂ
ಸತ್ತ ನೆನಪುಗಳ ಸುತ್ತ
ಗಿರಕಿ ಹೊಡೆಯುತ್ತಲೇ
ಇರುತ್ತದೆ,
ವಿವೇಕ ಹೇಳುತ್ತದೆ
ಇದರಿಂದ ಏನೂ
ಪ್ರಯೋಜನ ಇಲ್ಲ
ಬಿಟ್ಟು ಬಿಡು ಅಂತ.
ಆದರೂ ಕೇಳಬೇಕಲ್ಲ
ಬೇಕಾದ್ದು,ಬೇಡಾದ್ದು
ಎಲ್ಲಾ ನೆನಪಿಸಿಕೊಂಡು
ಆಕಾಶವೇ ತಲೆ ಮೇಲೆ
ಬಿದ್ದವರ ತರ ಪೆಚ್ಚು
ಮೋರೆ ಹಾಕಿಕೊಂಡು
ಅತ್ತು ಅತ್ತು ಕಣ್ಣೆಲ್ಲ
ಹೆಂಡ ಕುಡಿದವರಂತೆ
ಕೆಂಗಣ್ಣು ಮಾಡಿಕೊಂಡು
ಈ ದೇಹದ ಸೌಂದರ್ಯ
ಸತ್ಯ ನಾಶ ಮಾಡೋದರಲ್ಲಿ
ಅದೇನು ಖುಷಿನೊ
ಆ ದೇವರೆ ಬಲ್ಲ!
ಓ ಮನಸೆ, ಒಮ್ಮೆ
ನೀನೆ ಯೋಚಿಸಿ ನೋಡು
ಸ್ವಗ೯ದ ಬೇರು ನಿನ್ನಲ್ಲೇ ಇದೆ
ತಂಗಾಳಿಯಾಗಿ
ಸವಿ ಸವಿಯಾದ
ನೆನಪುಗಳಷ್ಟನ್ನೇ
ನೀ ಉಳಿಸಿಕೊಂಡು
ದೇಹವನ್ನು ಆವರಿಸಿಕೊ
ಶಿರದಲ್ಲಿ ಸಿಗುವುದು
ನಿನಗೆ ರಾಜ ಮಯಾ೯ದೆ
ಮನು ಕುಲಕೆ ನೀನಾಗಿರುವೆ
ಮೂಲಾಧಾರ.
1-1-2016. 2.47pm