ಮಳೆಯ ಮಹಿಮೆ

ನಶೆಯೇರಿದ ಬಾನಿಗೆ
ಇಳೆಯ
ಹಣಿಕಿ ನೋಡುವಾಸೆ
ಸುರಿವ
ಸೋನೆ ಮಳೆಗೆ
ಭುವಿಯ
ಒಡಲ ತುಂಬೆಲ್ಲ
ಹಸಿರ
ಚಿಗುರಿಸುವಾಸೆ
ಪ್ರಕೃತಿಗೆ
ಹೂ ಹಣ್ಣು ಹೊತ್ತು
ಮೆರೆಯುವಾಸೆ
ಬೀಸುವ
ಗಾಳಿಗೆ ಮರಗಿಡಗಳ
ಬೀಳಿಸುವಾಸೆ
ರೈತರಿಗೆ
ನೇಗಿಲ ಹಿಡಿದು
ಗದ್ದೆ ಊಳುವಾಸೆ
ಮಳೆಗಾಲ
ಎಲ್ಲರಿಗೂ
ತರಾವರಿ ಆಸೆ.
10-7-2016. 2.03pm

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮ ಟಿಪ್ಪಣಿ ಬರೆಯಿರಿ