ಕಿರುಗವನಗಳು

ಒಲವು

ಒಲವು ಪದೆ ಪದೆ
ಹುಟ್ಟುವುದಲ್ಲ
ಬೇಕೆಂದಾಗ ಬರುವ
ಕನಸೂ ಅಲ್ಲ
ಅದು ಭಾವನೆಗಳ
ಹಿಡಿ ಗಂಟು
ಒಮ್ಮೆ ಬಿಚ್ಚಿತೆಂದರೆ
ಅದರ ಕುರುಹು
ಅಳಿಸುವುದು ಕಷ್ಟ.
25-2-2017 9.30am

ಭರವಸೆ

ಇದೇನು ಗೆಳೆಯಾ
ಇಷ್ಟೊಂದು ಪ್ರಶ್ನೆಗಳು
ಆಗಬದಾದರೆ ಅಗಬಹುದು
ಇಲ್ಲವಾದರೆ ಇಲ್ಲ
ಅದಕ್ಯಾಕೆ ಇಷ್ಟೊಂದು ಚಿಂತೆ?
ಸಂತೆಯಲ್ಲೂ
ಚಿಂತೆ ಮರೆತ
ಅನಾಮಿಕನಂತೆ
ನೀನಿರಬಾರದೆ?
ಹೇಳಿರುವೆನಲ್ಲ
ಆಗಲೆ
ನಾ ನೀನಾಗಿ
ನೀ ನಾನಾಗಿ
ಕಳೆಯುವಾ ಕಾಲವೆಲ್ಲ!
26-2-2017 10.19am

ನೋವು

ಹಣ್ಣು
ಕೈಗೆ ಸಿಕ್ಕಾಗ
ತಿನ್ನಬೇಕೆನ್ನುವ ಆಸೆ
ತಿಂದಾದ ಮೇಲೆ
ಹಣ್ಣಿಲ್ಲವೆಂಬ ಸಮಸ್ಯೆ
ಕೊನೆಗೆ
ಅಂಟಿಕೊಳ್ಳುವುದು
ಬದುಕೆಂಬ
ನಂಟಿನಲ್ಲಿ ನೋವು
ನೋವು ನೋವೆ
ತಿಳಿದುಕೊಂಡೇನು ಫಲ?
ಚಿತ್ತ
ಅಲುಗಾಡಿಸುವ ರೆಂಬೆ!
1-3-2017. 7.35pm

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

2 thoughts on “ಕಿರುಗವನಗಳು”

ನಿಮ್ಮ ಟಿಪ್ಪಣಿ ಬರೆಯಿರಿ