Are you new to blogging, and do you want step-by-step guidance on how to publish and grow your blog? Learn more about our new Blogging for Beginners course and get 50% off through December 10th.
WordPress.com is excited to announce our newest offering: a course just for beginning bloggers where you’ll learn everything you need to know about blogging from the most trusted experts in the industry. We have helped millions of blogs get up and running, we know what works, and we want you to to know everything we know. This course provides all the fundamental skills and inspiration you need to get your blog started, an interactive community forum, and content updated annually.
ಕೋವಿಡ್ ಕಾಲ ಬೀದಿಯೆಲ್ಲ ಭಣ ಭಣ ಅಡಿಗೆ ಮನೆಯಲ್ಲಿ ಪಾತ್ರೆಗಳ ಟಣಟಣ ದಿಕ್ಕೆಟ್ಟ ಬದುಕಿನ ಪಯಣ ಪೊಲ್ಯೂಷನ್ ಮುಕ್ತ ವಾತಾವರಣ. ****************
ಕೆಲಸ ಆಗಬೇಕಾದ ಕಾಲಕ್ಕೇ ಆಗುವುದು ನೀವೆಷ್ಟು ಪ್ರಯತ್ನಿಸಿದರೂ ಕೂಡಿ ಬರದು ಕಾಲ ಕೂಡಿ ಬರಬೇಕೆಂದು ಇದಕ್ಕೇ ಹೇಳುವುದು ಸುಮ್ಮನಿದ್ದು ಬಿಡಿ ಸಾಕು ಅದರಷ್ಟಕ್ಕೇ ನಡೆಯುವುದು. *****************
ರಾಜಕೀಯವೆಂಬುದು ದುಡ್ಡು ಮಾಡುವ ತಾಣ ಆಮಿಷಕ್ಕೆ ಬಲಿಯಾಗದಿರುವವರು ಯಾರೂ ಕಾಣಾ ಕಂತೆ ಕಂತೆ ನೋಟು ತಂದು ಮನೆಯೆಲ್ಲ ಝಣಝಣ ಸಿಬಿಐ ಕಣ್ಣಿಗೆ ಬಿದ್ದರೆ ಮನೆ ಗುಡಿಸಿ ಗುಡಾಣ. ************* 11-1-2021. 8.54am
ಹೊಸವರ್ಷದ ಹೊಸ್ತಿಲಲ್ಲಿ ಟೀವಿ ಚಾನಲ್ ಒಂದರಲ್ಲಿ ಅಂಬೋಣ ; 2021ರಲ್ಲಿ ವೃಷಭ ರಾಶಿಯವರಿಗೆ ಈ ವರ್ಷ ಆಗೊ ಕೆಲಸ ಆಗುವುದು ಡೋಲಾಯಮಾನ. ಆಗುತ್ತೆ ಆಗುತ್ತೆ ಅನ್ನುವಷ್ಟರಲ್ಲಿ ಕೈತಪ್ಪುತ್ತದೆ… ಇತ್ಯಾದಿ ಇತ್ಯಾದಿ ಹೇಳುತ್ತಿರುವುದು ಕಿವಿಗೆ ಬಿದ್ದಿದ್ದೇ ತಡ ಟೀವಿ ಕಿವಿ ತಿರುಪಿ ಸ್ವಲ್ಪ ಸೌಂಡ್ ಜೋರು ಮಾಡಿದೆ.
ಅದು ಹಾಗೆ ನಂಬ್ತೀವೋ ಬಿಡ್ತಿವೋ…ಆ ಕಡೆ ಈ ಕಡೆ ಓಡಾಡಿಕೊಂಡು ಬೆಳಗಿನ ಕೆಲಸ ಮಾಡುವಾಗ ಟೀವಿ ಆನ್ ಆಗಿರಬೇಕು. ಒಂದು ಚಾನೆಲ್ ಹಾಕಿದೆನೆಂದರೆ ಕಾರ್ಯಕ್ರಮ ಯಾವುದೇ ಇರಲಿ ಅದರ ಪಾಡಿಗೆ ಅದು ನನ್ನ ಪಾಡಿಗೆ ನನ್ನ ಕೆಲಸ. ಚಾನೆಲ್ ಬದಲಾಯಿಸುವ ಪುರುಸೊತ್ತು ಅಥವಾ ಕಾರ್ಯಕ್ರಮ ಕೂತು ನೋಡಬೇಕು ಅನ್ನುವ ಇರಾದೆ ಇಲ್ಲ. ಒಟ್ಟಿನಲ್ಲಿ ಮನೆಯೆಲ್ಲ ಗಲಾ ಗಲಾ ಅಂತಿರಬೇಕು ಅಷ್ಟೇ. ಇವಳೇನು ಕೆಲಸ ಕಾರ್ಯ ಮಾಡೋದು ಬಿಟ್ಟು ಬೆಳಿಗ್ಗೆಯೇ ಟೀವಿ ನೋಡುತ್ತಾ ಕೂತಿರೋದಾ? ನಮ್ಮನೆ ಟೀವಿ ಸೌಂಡು ಕೇಳಿದವರು ಅಂದುಕೊಳ್ಳುವ ಬಗ್ಗೆ ನನ್ನ ಯಾವ ತಕರಾರೂ ಇಲ್ಲ. ಏಕೆಂದರೆ ನನಗೆ ಫುಲ್ ಮೌನ ಆಗಿಬರೋದಿಲ್ಲ ಬೆಳಿಗ್ಗೆ. ಸಂಗ್ತೀಗೆ ಅಡಿಗೆ ಮನೆಯಲ್ಲಿ ಬೆಳಿಗ್ಗೆ ಎದ್ದಲಿಂದ ಬೆಂಗಳೂರು ವಿವಿಧ ಭಾರತಿ ಆನ್ ಆಗಿರಬೇಕು. ಚೂರು ಪಾರು ಸುದ್ದಿ ಸಮಾಚಾರ, ಕನ್ನಡ ಚಿತ್ರಗೀತೆ ಕೇಳ್ಕೊಂಡು ಹಾಡ್ಕೊಂಡು ಅಡಿಗೆ ಕೆಲಸ …..
ನನ್ನ ಸೋದರ ಮಾವನ ಕೃಪಾಕಟಾಕ್ಷ ಜೊತೆ ಜೊತೆಗೆ ಟೀವಿ ರೆಡಿಯೋ ಕೇಳೋದು. ಅವರ ಮನೆಯಲ್ಲಿ ಇದ್ದಾಗ ಮೇಲ್ಗಡೆ ರೆಡಿಯೋ ಕೆಳಗಡೆ ಟೀವಿ. ಜೊತೆಗೆ ಮೂರು ನಾಲ್ಕು ಪೇಪರ್ ನಿತ್ಯ. ಯಾಕ್ ಮಾವ ಹೀಗೆ ಎಂದರೆ ಇವುಗಳನ್ನೆಲ್ಲ ಕೇಳಿ, ನೋಡಿ, ಓದಿದ ಮೇಲೇ ನನ್ನ ನಿತ್ಯದ ಕಾರ್ಯಕ್ರಮ ನಿರ್ಧಾರ ಮಾಡೋದು. ಇಲ್ಲ ಅಂದ್ರೆ ಹೇಗೆ ಗೊತ್ತಾಗೋದು? ಹತ್ತು ಗಂಟೆಗೆ ಹೆಗಲಿಗೊಂದು ಜೋಳಿಗೆ ಏರಿಸಿ ಹೊರಗಡೆ ಹೊರಟರೆಂದರೆ ಸಾಯಂಕಾಲವೋ ಅಥವಾ ರಾತ್ರಿ ಬರೋದು. ಅಷ್ಟೊಂದು ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಖುದ್ದಾಗಿ ಭಾಗವಹಿಸುವ ಹುಚ್ಚು. ಆದರೆ ನಾನು ಮನೆಯಲ್ಲಿ ಕೇಳೋದು ಮಾತ್ರ ತಿರುಗಾಡಲು ಅಲ್ಲ.
ಅಂದಹಾಗೆ ಕೇಳುವ ಕುತೂಹಲ ನಮ್ಮ ರಾಶಿ ಚಕ್ರದ ಸಮಾಚಾರ, ಭವಿಷ್ಯ ವಾಣಿ ಉವಾಚಿಸುವಾಗ. ಅದರಲ್ಲೂ ಈ ಮೊದಲೇ ಯಾವುದೋ ಕಾರ್ಯ ನಿಮಿತ್ತ ಜ್ಯೋತಿಷಿಗಳ ಹತ್ತಿರ ಹೋದಾಗ “ನಿಮ್ಮದು ವೃಷಭ ರಾಶಿ. ಜೀವನವೆಲ್ಲ ದುಡಿಯೋದೆ” ಹೇಳಿದ್ದು ಕೇಳಿದ ಮೇಲೆ ಅದು ಹಾಗೆ ಆಗುತ್ತಿರುವುದರಿಂದ ಕೊಂಚ ಭವಿಷ್ಯ ವಾಣಿ ಮೇಲೆ ಆಸಕ್ತಿ ಹೆಚ್ಚು ಮನಸಿಗೆ.
ಆಗಲಿ ನಂಗೇನೂ ಬೇಜಾರಿಲ್ಲ. ಎತ್ತು ತಾನೆ…ಹೊಲ ಊಳೋದಾದರೇನು ಚಕ್ಕಡಿಗಾಡಿಗೆ ಹೆಗಲು ಕೊಡೋದಾದರೆ ಏನು… ಎಲ್ಲಾ ಒಂದೇ. ಹೇಗಿದ್ರೂ ಜೀವನದ ಬಂಡಿ ಎಳಿಲೇ ಬೇಕಲ್ಲಾ…ಬಿಡೋಕಾಗುತ್ತಾ ಅಂತ ಒಂದು ಖುಷಿ, ಸಮಾಧಾನ. ಕಾರಣ ಹಸು, ಎಮ್ಮೆಗಳ ಮಧ್ಯೆ ಬೆಳೆದವಳು. ಹಿಂದೆಲ್ಲಾ ಅವುಗಳ ದುಡಿತ ಕಂಡು ಮರುಗುತ್ತಿದ್ದೆ ಅಪ್ಪನ ಮನೆಯಲ್ಲಿ ಇದ್ದಾಗ. ಈಗ ನನ್ನ ರಾಶಿ ಭವಿಷ್ಯ ಅವರೊಂದಿಗೆ ನಂಟಿದೆಯಲ್ಲಾ… ಇರಲಿ ಬಿಡಿ…ತಲೆ ಹೋಗೋದೇನು? ದೇಹದಲ್ಲಿ ಶಕ್ತಿ ಇರೋವರೆಗೆ ತಾನೇ? ಆಮೇಲೆ ಇದ್ದೇ ಇದೆ ಪಲ್ಲಂಗದ ನಂಟು. ಬಲ್ಲವರಾರು ಕೊನೆಗಾಲದ ಅಂಟು?
ಆದರೆ ಈ 2021ರ ಭವಿಷ್ಯ ಮಾತ್ರ ಒಂದು ರೀತಿ ಸ್ಟಾರ್ಟಿಂಗ್ ನಲ್ಲೇ ಕುತ್ತಿಗೆ ಹಿಡಿತಿದೆಯಲ್ಲಾ! ಸಾಮಾನ್ಯವಾಗಿ ಕೇಳಿದ್ದು ಎಂತಾ ಭವಿಷ್ಯವೇ ಆಗಲಿ ಕಾರ್ಯ ರೂಪಕ್ಕೆ ಬರುವವರೆಗೂ ನಂಬೊ ಜಾಯಮಾನ ನಂದಲ್ಲ. ನನ್ನಷ್ಟಕ್ಕೆ ಬದುಕಿನ ತೇರು ಎಳೆಯುತ್ತಿರೋದೆ. ರಾಹುಕಾಲ, ಗುಳಿಕಕಾಲ, ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಊಹೂಂ ಇವೆಲ್ಲ ಏನೂ ನೋಡೋದೂ ಇಲ್ಲ. ಹಾಗಂತ ನಂಬೋದಿಲ್ಲ ಅಂತಾನೂ ಅಲ್ಲ. ನನ್ನ ಸಮಯ, ಆರೋಗ್ಯ ನೋಡಿಕೊಂಡು ಕೆಲಸ ಮಾಡ್ತಿರೋದೆ. ಏನಾದರೂ ಎಪರಾ ತಪರಾ ಆದರೆ ಆಗ ಕೊಂಚ ಕೂತು ಯೋಚಿಸಿ,” ಬಿಟ್ಟಾಕು ಆದಾಂಗಾಗುತ್ತದೆ…. ನಿನ್ನ ಕೆಲಸ ನೀ ಮಾಡಿದ್ದೀಯಾ….ನಡಿಯೆ ಸಾಕು ಇನ್ನೆಂತಕೆ ಯೋಚನೆ” ಎಂಬ ಅಂಬೋಣ ಮನಸಿನದು. ” ನೀನೆಷ್ಟೇ ಪ್ರಯತ್ನ,ವಾರ ತಿಥಿ ನೋಡಿದರೂ ಅದು ಏನಾಗಬೇಕೋ ಹಾಗೆ ಆಗೋದು “ಎಂಬ ನನ್ನಜ್ಜಿ ಮಾತು ನೆನಪನ್ನೂ ಮಾಡಿಕೊಂಡು ಒಂದಿಷ್ಟು ಮುಂದಿನ ಕೆಲಸಕ್ಕೆ ಅಣಿಯಾಗುತ್ತೇನೆ.
ಅದೇನಪ್ಪಾ ಅಂದರೆ ಈ ಕೋವಿಡ್ ಬಂದ ನೆವವೋ ಅಥವಾ ಟೀವಿ ಭವಿಷ್ಯವೋ ಈ ವರ್ಷ ಮಾಡಬೇಕಾದ, ಮಾಡಿಸಬೇಕಾದ ಕೆಲಸ ಒಂದೂ ಆಗ್ತಿಲ್ಲ. ಸಂಬಂಧಪಟ್ಟ ಕೆಲಸದವರಿಗೆ ಫೋನು ಮಾಡಿದಾಗ “ಮೇಡಂ ನಾಳೆ ಬೆಳಿಗ್ಗೆ ಒಂಬತ್ತು ಘಂಟೆಗೆ ಬಂದುಬಿಡ್ತೇನೆ ಆಯ್ತಾ? ಅದೆನೇನು ಇದೆ ಎಲ್ಲಾ ಹೇಳಿಬಿಡಿ ಮುಗಿಸಿಬಿಡುವಾ.”
ನಾನಂತೂ ಸಧ್ಯ ಒಂದೊಂದಾಗಿ ಎಲ್ಲಾ ಕೆಲಸ ಮಾಡಿ ಮುಗಿಸಿ ಹಾಯಾಗಿರೋಣ ಅಂದುಕೊಂಡು ಬೆಳಿಗ್ಗೆ ಬೇಗ ಎದ್ದು ಸ್ನಾನ, ಪೂಜೆ, ತಿಂಡಿ, ಅಡಿಗೆ ಎಲ್ಲ ಮಾಡಿ ಕಾಯ್ತಾ ಇದ್ದರೆ …ಒಂಬತ್ತಾಯಿತು, ಹತ್ತಾಯಿತು ಗಂಟೆ ಜಾರೋದೊಂದೆ ಬಂತು ಆಸಾಮಿಗಳು ಪತ್ತೆಯೇ ಇಲ್ಲ. ಶಿವನೇ…. ಏನಿದು? ಯಾವತ್ತೂ ಹೀಗಾಗಿದ್ದಿಲ್ಲ. ಈಗ ಮಾತ್ರ ಯಾಕೀಗೆ? ಥೋsssss ಭವಿಷ್ಯ ನಂಬೋಹಾಗೆ ಆಯ್ತಲ್ಲಾ.
ನಿಜಕ್ಕೂ ಇವತ್ತಿಗೂ ಒಂದು ಕೆಲಸವೂ ಆಗದೇ ಮೂರು ತಿಂಗಳಿಂದ ಸತಾಯಿಸುತ್ತಿದೆ. ಹಾಗಾದರೆ ಟೀವಿಯಲ್ಲಿ ಭವಿಷ್ಯ ಹೇಳುವವರಿಗೆ ಹಿಂದಿನ ವರ್ಷದ ಕೊನೆಯಿಂದಲೇ ಈ ರೀತಿ ಆಗುತ್ತದೆ ಎಂದು ಯಾಕೆ ಹೇಳಿಲ್ಲ?
ಅಲ್ಲಾ ಈ ಹಿಂದಿನ ವರ್ಷದ ಭವಿಷ್ಯ ನನ್ನ ಕಿವಿಗೆ ಬಿದ್ದಿಲ್ಲ ಆಯ್ತಾ? ಅವರು ಹೇಳಿರಲೂಬಹುದು. ಹೇಳೇ ಹೇಳಿರುತ್ತಾರೆ ಅಲ್ವಾ? ಸುಮ್ಮನೆ ಅನುಮಾನ ಯಾಕೆ ಪಾಪ!
ಇಷ್ಟೆಲ್ಲಾ ಒದ್ದಾಟದ ನಡುವೆ ನನ್ನ ಮೇಲೆ ನನಗೆ ಅನುಮಾನ ಬಂದು ನಾನೇನಾದರೂ ಸರಿಯಾದ ಕ್ರಮದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿಲ್ಲವೆನೋ ಅಂತ ಚೂರು ಯೋಚಿಸಿದೆ. ಇಲ್ಲ ಎಲ್ಲವೂ ಸರಿಯಾಗಿದೆ….ಓಹೋ… ಇದು ಕೊರೋನಾ ಪ್ರಭಾವ. ಈಗ ಪಂಜರದಿಂದ ಹಕ್ಕಿ ಹೊರ ಬಂದಂತೆ ಜನರ ಕೆಲಸ ಕಾರ್ಯ ಜೋರು. ಆದರೆ ಕೆಲವು ಕೆಲಸಗಾರರಿಗೆ ಭಯಂಕರ ಡಿಮಾಂಡ್ ಕೂಡಾ ಇರಲಿಕ್ಕೆ ಸಾಕು.
ನೋಡಿ ಮನೆಯಲ್ಲಿ ಕರೆಂಟ್ ರಿಪೇರಿ, ಪ್ಲಂಬಿಂಗ್ ಕೆಲಸ, ಕಾರ್ಪೆಂಟರ್ ಕೆಲಸ, ಸಂಪು ಟ್ಯಾಂಕ್ ಕ್ಲೀನಿಂಗ್, ಗಾರೆಯವನು (ಮೋಲ್ಡಲ್ಲಿ ಒಂದೆರಡು ಕಡೆ ಲೀಕೇಜ್), ಜೊತೆಗೆ To-let ಬೋರ್ಡ್ ತಗಲಾಕ್ಕಂಡಿದ್ದು ಇತ್ಯಾದಿ…. ಇತ್ಯಾದಿ ಉಫ್….. ಕೊರೋನಾ ಕಾಲದಲ್ಲಿ ನಮ್ಮನೆಯಲ್ಲಿ ರಿಪೇರಿದು ಇಷ್ಟುದ್ದ ಲೀಸ್ಟ್. ಅದೇನೊ ಹೇಳ್ತಾರಲ್ಲ “ಬರಗಾಲದಲ್ಲಿ ಮಗ ಉಣ್ಣೋದು ಕಲಿತಿದ್ದನಂತೆ.”. ಪಕ್ಕದ ಮನೆ ಆಂಟಿ ಉಪದೇಶ ;. “ಕೊರೋನಾ ಕಂಡ್ರೀ… ಯಾರನ್ನೂ ಸೇರಿಸಬೇಡಿ ಮನೆಯೊಳಗೆ…..” ಅವರು ಹೇಳಿದ್ದು ಸರಿಯಾಗಿದೆ. ಆದರೆ……
ನಾನೋ….ಆಗಿದ್ದಾಗಲಿ….ಬಂದಿದ್ದೆಲ್ಲಾ ಬರಲಿ, ಗೋವಿಂದನ ದಯವಿರಲಿ ಹೇಳ್ತಾ ರಿಪೇರಿ ಮಾಡಿಸುವ ನಿರ್ಧಾರ ಮಾಡಿದೆ. ಆದರೆ ಮನಸಿನ ಮೂಲೆಯಲ್ಲಿ ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ ಭಾಸವಾಗುತ್ತದೆ ಕೊರೋನಾ ನೆನಪಾದರೆ!
ಸ್ವಂತ ಮನೆಗಿಂತ ಬಾಡಿಗೆ ಮನೆಯೇ ವಾಸಿ ಕಂಡ್ರೀ….ಸದಾ ಒಂದಲ್ಲಾ ಒಂದು ರಿಪೇರಿ… ದುಡ್ಡು ಸುರಿತಾನೇ ಇರಬೇಕು….
ಇದರ ಮಧ್ಯೆ ಸಾಕಿಕೊಂಡ ಪುಟಾಣಿ ಬೆಕ್ಕಿಗೋಸ್ಕರ ಕೆಲವು ಕಡೆ ಗ್ರಿಲ್ ಮೇಲೆ ಮೆಷ್ ಹಾಕಿಸುವ ನಿರ್ಧಾರ. ಮೊದಲಾಕಿದ್ದು ಅಗಲ ಗ್ರಿಲ್. ಅದರ ಮೇಲೆ ಚಿಕ್ಕದು. ಒಂದಿಷ್ಟು ಓಣಿ ಕಡೆ ಆಟವಾಡಿಕೊಂಡು ಇರಲಿ ಅಂತ. ಪಕ್ಕನೆ ಕಿಟಕಿ ಸಂಧಿಯಲ್ಲಿ ಪರಾರಿ ಆಗದಿರಲೆಂಬ ಕಾಳಜಿ. ಈ ಹಿಂದೆ ಸಾಕಿದ ಬೆಕ್ಕುಗಳೆಲ್ಲ ನಾಯಿ ಬಾಯಿಗೆ ಬಲಿಯಾಗಿ ನೆನಪಿಸಿಕೊಂಡರೆ ಯಮ ಸಂಕಟ!
ಹತ್ತು ದಿನಗಳಿಂದ ಬರ್ತೀನಿ ಬರ್ತೀನಿ ಹೇಳುತ್ತಿದ್ದ ಗ್ರಿಲ್ ನವನು ಇವತ್ತಂತೂ ತನ್ನ ಪರಿಕರಗಳೊಂದಿಗೆ ಬೆಳಿಗ್ಗೆ ಒಂಬತ್ತಕ್ಕೆಲ್ಲ ಬರ್ತೀನಿ ಅಂದವನು ಮಧ್ಯಾಹ್ನವಾದರೂ ಬಾರದೇ ಇನ್ನೇನು ಉಂಡು ಮಲಗಿದ್ನಾ? ತಕಳಪ್ಪಾ ಫೋನು ಮೇಡಂ ಲೇಟಾಗೋಯ್ತು ಊಟ ಮಾಡಿ ಬರ್ತೀನಿ. ಇನ್ನೆಲ್ಲಿ ಮಲಗಲು ಮನಸ್ಸು ಬರುತ್ತಾ? ಖುಷಿಯಲ್ಲಿ ಎದ್ದೆ, ಒಂದು ಬಿಸಿ ಚಹಾ ಕುಡಿದು ಕಾದೆ… ಕಾದೆ…. ಅಂತೂ ಬಂದ್ರಪ್ಪಾ ನಾಲ್ಕು ಜನರ ತಂಡ ಮನೆ ಮುಂದೆ ಸಂಜೆ ನಾಕೂಮೂವತ್ತಕ್ಕೆ ಗಡರ್ ಗಡರ್ ಸೌಂಡ್ ಮಾಡುತ್ತಾ ನಿಂತಿತು ಆಟೋ…..
ನೋಡಿದೆ ಮೆಷ್ಶಿಗೆ ಬಣ್ಣ ಸರಿ ಹಚ್ಚಿಲ್ಲ…. ಸುತ್ತುವ ತಂತಿ ಇದಲ್ಲಾ…..ನಂಗ್ಯಾಕೊ ಈ ರೀತಿ ಕೆಲಸ ಸರಿ ಬರ್ತಿಲ್ಲ
ಮೇಡಂಮ್ಮೋರೆ ಇದೇ ತಂತಿ ಸುತ್ತೋದು. ಒಂದು ವರ್ಷ ಏನೂ ಆಗಲ್ಲ…. ಬಣ್ಣ ಹಚ್ಚಬೇಕಾದರೆ ತೆಗೆದಾಗ ಮತ್ತೆ ನೀವೇ ಬೇರೆ ತಂತಿಯಲ್ಲಿ ಸುತ್ತಿಸಬೇಕು…..
ಅದೆಲ್ಲಾ ಆಗಲ್ಲ ಬೇರೆ ಗಟ್ಟಿಯಾದ ತಂತಿ ತಂದು ಸುತ್ತಿ, ಇದು ತುಕ್ಕು ಹಿಡಿತದೆ. ಇಲ್ಲಾಂದ್ರೆ ಬೇಡವೇ ಬೇಡ ಹೋಗಿ ಎಂದು ದಬಾಯಿಸಿದ್ದಕ್ಕೆ ಮತ್ತದೇ ಆಟೋದಲ್ಲಿ ಹೊರಟರು ಇಬ್ಬರು ತಂತಿ ತರೋದಕ್ಕೆ.
“ಮೇಡಂವರೆ ಈ ಮಳೆಯಲ್ಲಿ ಗ್ರಿಲ್ ವರ್ಕ್ ಮಾಡೋದಕ್ಕೆ ಆಗುವುದಿಲ್ಲ….. ಇನ್ನೊಂದು ದಿನ ಬರುತ್ತೇವೆ ಎಲ್ಲಾ ಸರಿಮಾಡಿಕೊಂಡು.”
ತಕಳಪ್ಪಾ ಆಗೋ ಕೆಲಸಕ್ಕೂ ಕಲ್ಲು ಬಿತ್ತು. ಇದ್ಯಾವ ಪರಿ ಮಳೆಗಾಲ ಈ ವರ್ಷ! ಜನವರಿಯಲ್ಲೂ ಸುರಿಯುತ್ತೆ……
ಇರಲಿ. ಇಷ್ಟು ದಿನವೇ ತೆಡೆದಿದೆ. ಇನ್ನೊಂದು ಎರಡು ದಿನದಲ್ಲಿ ಏನಾಗಿಹೋಗೋದು? ಆಯ್ತಪ್ಪಾ ಹಾಗೆ ಮಾಡಿ ಎಂದೆ. ಜೊತೆಗೆ ಮಳೆ, ಚಳಿ ನೋಡಿ ಯಾಕೊ ಪಾಪ ಅನಿಸಿತು…ಇರಿ…ಇರಿ…ನಿಮಗೆಲ್ಲ ಕಾಫಿನೋ ಟೀನೋ… ಹೇಳಿ. ಕುಡಿದು ಹೋಗಿ …..ಅಂತ ಕೊಟ್ಟಿದ್ದೂ ಆಯಿತು …..ಬಿಸಿ ಬಿಸಿ ಕಾಫಿ ಕುಡಿದು ಹೋದರು ಶನಿವಾರಕ್ಕೆ ಗೀಟಾಕಿ.
ಇನ್ನು ಕಾರ್ಪೆಂಟರ್ ಭಾನುವಾರ ಬರ್ತೀನಿ ತಪ್ಪದೇ ಅಂದವನು ಅದ್ಯಾವ ಭಾನುವಾರ ಬರ್ತಾನೋ ಗೊತ್ತಿಲ್ಲ…..
ಮತ್ತೆ ಪ್ಲಂಬರ್ ನಾಳೆ ಬೆಳಿಗ್ಗೆ ಒಂಬತ್ತಕ್ಕೆಲ್ಲ ಬರ್ತೀನಿ ಅಂದಿದ್ದಾನೆ… ಮೂರು ತಿಂಗಳಿಂದ ಹೀಗೆ ಹೇಳುತ್ತಾ ಸತಾಯಿಸ್ತಾ ಬಂದವನು ನೋಡಬೇಕು ನಾಳೆಯಾದರೂ ಅವನ ಮಾತು ಖರೇ…ಆಗುತ್ತಾ ಅಥವಾ ಈ ಚಳಿಯಲ್ಲಿ ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿದ್ದೇ ಬಂತಾ ಅಂತ??
ಮುಡಿವ ಮಲ್ಲಿಗೆ ಹೂವಿಗೂ ನೀನು ತನ್ನ ನೋಡಬೇಕೆಂಬ ಹಂಬಲವಿತ್ತು ಆದರೆ ಇಂದೇಕೋ ಅದಕ್ಕೂ ಒಂದು ರೀತಿ ತಾತ್ಸಾರ ಮುಡಿಯೇರಲು, ನಿನ್ನ ನಿರೀಕ್ಷಿಸಲು.
ಹೇಳುತ್ತದೆ ; ಬಿಡು ನಾನಿಲ್ಲೇ ಇರುವೆ ಆ ಬಾನಂಗಳದ ಚಂದಿರನ ಬೆಳಕಿಗೆ ಅರಳಿ ವಿರಮಿಸುತ್ತೇನೆ ನನ್ನಷ್ಟಕ್ಕೆ.
ಒಂಟಿ ಬದುಕು ಹೊತ್ತು ಕಳೆಯುವುದಿಲ್ಲ ಗೊತ್ತಿರುವುದಾದರೂ ಕಲ್ಪನೆಗಿಂತ ಮಿಗಿಲು ಕಾಲ ಇತ್ತ ಬಾ ಎಂದು ಕರೆಯುವವರಿಲ್ಲದ ಮೇಲೆ ಮುಡಿದ ಹೂವಿಗೂ ತೊರೆದು ದೂರವಾಗಬೇಕೆಂಬ ಹಂಬಲ ಸಹಜವಾದರೂ ….. ಸಹಿಸುವ ಶಿಕ್ಷೆ ಶಬ್ಧಾತೀತ ಚಿವುಟಿ ಹಾಕುವ ಬದುಕಿಗೆ ಏನೇನೆಲ್ಲಾ ಕಸರತ್ತು.
ಕಾಪಿಟ್ಟ ದಿನಗಳು ಅರಳುವ ಮೊಗ್ಗಿನಂತೆ ಗೊತ್ತೇ ಆಗದಷ್ಟು ನೀಗೂಢ ಕಾಲ ಉರುಳಿದಂತೆಲ್ಲ ಭಗ್ನ ಶರೀರ ತೊದಲುತ್ತದೆ ಒದ್ದಾಡುತ್ತದೆ ಮತ್ತದೇ ಚಿಂತೆಯಲಿ ಸಿಲುಕಿ.
ಆಗಬೇಕು ಆಗಬೇಕಾದ ಕಾಲಕ್ಕೆ ತಕ್ಕಂತೆ ಒದರಾಡುವ ಸರೀಸ್ರಪಗಳು ಹಿಂದಿನಿಂದ ಮಾತುಗಳ ಒಗೆಯುತ್ತವೆ ಗುರಿಯಿಟ್ಟು ಸಹಿಸುವ ಶಿಕ್ಷೆ ಅದೆಷ್ಟು ಕಠೋರ!
ಈಗೀಗ ನಲುಗಿದ ಮಲ್ಲೆ ಕೂಡಾ ಮುರುಟುತ್ತಿದೆ ಹೆರಳೇರದೇ ಅದರಂದ ಹೊಗಳುವವರಿಲ್ಲದೇ ಎದೆಯ ಬೇಗೆ ತಾಕಿರಬೇಕು ಮೊಗ್ಗು ಹೇಗೆ ಅರಳಿಯಾವು ಎದೆ ಸೆಟೆದು? ಎಲ್ಲವೂ ವಿಧಿಲಿಖಿತವೆಂದು ಸುಮ್ಮನೆ ಅರ್ಧಂಬರ್ಧ ಅರಳಿ ಬೀಳುತ್ತವೆ ಕೊಂಚ ಕೆಂಪಾಗಿ, ಹಳದಿಯಾಗಿ ಹೊರಳಾಡಿ ಜೀಕುತ್ತವೆ ಒಣಗಿ ಒಣಗಿ ಗಾಳಿಗೆ ತೂರಿ ಕಣ್ಣಿಂದ ಮರೆಯಾಗುತ್ತವೆ ಆಗೆಲ್ಲಾ ಮನಸು ಸತ್ತವರ ಮನೆಯ ಸೂತಕದಂತೆ!
ಮುಡಿಗೇರಿದ ಆ ದಿನಗಳೇ ಚಂದಿತ್ತೆಂದು ಮೆಲ್ಲಗೆ ನಡುರಾತ್ರಿಯಲಿ ಹಲುಬುತ್ತವೆ ಕೇಳಿದ ಚಂದಿರನೂ ನೋಡಿ ನಕ್ಕಾನೆಂಬ ಆತಂಕದಲ್ಲಿ ಮಲ್ಲೆಗೊಂದು ಶಾಪವೇ ಸರಿ.
ಆದರೂ ನೆನಪಾದಾಗಲೆಲ್ಲ ಮುಡಿಗೇರಿಸಿಕೊಂಡು ಮೆರೆಯುವಾಸೆ ದೂರವಾದ ಮಲ್ಲಿಗೆಯ ಆಗಾಗ ಮನಸು ಬಾ ಎಂದು ಕರೆಯುತ್ತದೆ ತೊರೆದು ಹೋಗದಿರೆಂದು ದೈನ್ಯದಿಂದ ನೋಡುತ್ತ ದೂರವೇ ಉಳಿಯುತ್ತದೆ ನೀನಿನ್ನು ನನಗೆ ಬೇಡಾ ಎಂಬ ಭಾವದಲ್ಲಿ ಎದೆಗೆ ಭರ್ಚಿಯ ಈಟಿ ತಿವಿದ ಅನುಭವ ಅಳು ಹತಾಶೆಯ ಸಾಂಗತ್ಯ ತಳ ಕಂಡಿದೆ ಸಾಕಾಗಿ.
ಹೊಸವರ್ಷಕೆ ಹಾಕಿದೆ ನಾಂದಿ ಲೈಫ್ ದಿಲ್ದಾರಾಗಿ ಕಳೆಯಬೇಕು ನೆನಪಾಯಿತು ಕೋವಿಡ್ ಹಾವಳಿ ಮನಸೇಳಿತು ಹೀಗೆ ಬದುಕಿದರೆ ಆಗುವೆ ಬೇಗ ನೀನು ದಿವಾಳಿ ಅದಕ್ಕೆ ಪಕ್ಕದ ಮನೆಯೇ ಈಗ ನನ್ನ ಊಟದ ಖಾನಾವಳಿ. **************
ನನ್ನಮ್ಮ ಹೇಳುತ್ತಿದ್ದರು ಅಚ್ಚುಕಟ್ಟಾಗಿ ಬದುಕೋದು ಕಲಿಯೆ ಆದರೀಗ ಅದಾಗಲೇ ಕಲಿಸಿತು ನೀನು ಹೀಗೀಗೆ ಬದುಕಲೇಬೇಕು ಉಳಿಗಾಲವಿಲ್ಲ ನೋಡು ಅದಕ್ಕೇ ಮನೆ ಸಣ್ಣದಾದರೂ ಮನಸು ಸುಮ್ಮನಾಗಿದೆ ಜಾಣಾ. **************
ಬಗೆ ಬಗೆಯ ಬಿಸಿ ಬಿಸಿ ಬಜ್ಜಿ ತಿನ್ನೆಂದು ಹೇಳಿತು ಚಳಿ ಈಗ ಬಿಟ್ಟರೆ ಇನ್ನೊಂದು ವರ್ಷ ಬಾರದಿರುವ ಚಳಿಗೆ ವಿದಾಯ ಹೇಳುತ್ತ ಮೆದ್ದೆ ಬದನೆಕಾಯಿ ಬಜ್ಜಿ. ************** 2-12-2021 4.11pm